ಕರ್ನಾಟಕ ಜಾನಪದ
ವಿಶ್ವವಿದ್ಯಾಲಯದ ಅಕ್ರಮ ನೇಮಕಾತಿ ರದ್ದುಪಡಿಸಿ ನ್ಯಾಯಾಂಗ ತನಿಖೆಗೆ ಮತ್ತು ಮರುನೇಮಕಾತಿಗೆ, ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ
ಸೂಕ್ತ ನಿರ್ಣಯ ಮಾಡುವಂತೆ ಆಗ್ರಹಿಸಿ, ಕಳೆದ ದಿನಾಂಕ 5ನೇ ಡಿಸೆಂಬರ್ 2023 ರಿಂದ ನಡೆಸಲಾಗುತ್ತಿರುವ ಅನಿರ್ದಿಷ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹ ಹೋರಾಟವನ್ನು
ಖಂಡಿಸಿ ಮೊನ್ನೆ ಪತ್ರಿಕಾ ಹೇಳಿಕೆ ನೀಡಿದ್ದ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ
ಮಾಜಿ ಉಪಾಧ್ಯಕ಼ ಡಿ.ಎಸ್. ಮಾಳಗಿ ಅವರು ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡು ಸದರಿ ಹೋರಾಟಕ್ಕೆ
ತಮ್ಮ ಸಂಪೂರ್ಣ ಬೆಂಬಲ ನೀಡಿದ್ದಾರೆ.
ಜಾನಪದ ವಿಶ್ವವಿದ್ಯಾಲಯದ ಅಧಿಕಾರಿಗಳು ತಮಗೆ
ಸುಳ್ಳು ಮಾಹಿತಿ ನೀಡಿದ್ದರು:
ಇಂದು (11ನೇ ಡಿಸೆಂಬರ್
2023)ಮುಂಜಾನೆ ಧರಣಿ ನಿರತ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ
ಕುಲಪತಿ, ಕುಲಸಚಿವ ಮತ್ತು ಸಹಾಯಕ ಕುಲಸಚಿವರು ತಮಗೆ ತಪ್ಪು ಮಾಹಿತಿ ನೀಡಿ ನಿಮ್ಮ ಹೋರಾಟವನ್ನು ಖಂಡಿಸಲು
ಮನವಿ ಮಾಡಿದ್ದರಿಂದ ನಾನು ಆ ರೀತಿ ಹೇಳಿಕೆ ನೀಡಿದ್ದೆ.
ತಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇನೆ
: ಈಗ ನನಗೆ ವಸ್ತುಸ್ಥಿತಿ
ಸಂಪೂರ್ಣವಾಗಿ ಅರ್ಥವಾಗಿದೆ. ವಿಶ್ವವಿದ್ಯಾಲಯದ ಅಧಿಕಾರಿಗಳಿಂದ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಕಷ್ಟು
ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ್ದು ಗೊತ್ತಾಗಿದೆ. ಆದ್ದರಿಂದ ನನ್ನ ಮೊನ್ನೆಯ ಹೇಳಿಕೆಯನ್ನು ಹಿಂದಕ್ಕೆ
ಪಡೆದುಕೊಂಡು ತಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇನೆ ಎಂದರು. ಇದೇ ಸಂದರ್ಬದಲ್ಲಿ ಜಾನಪದ ವಿಶ್ವವಿದ್ಯಾಲಯದ ಅಧಿಕಾರಿಗಳ ಈ ಬಗೆಯ ವರ್ತನೆಗಳನ್ನು ಖಂಡಿಸಿದರು.